ನಿರೀಕ್ಷೆಯ ಸಸಿ ನೆಟ್ಟು
ಕ್ರಾಂತಿ ಋತು ಕೈಗೆತ್ತಿಕೊಂಡು
ಭವಿಷ್ಯದ ಭಾರೀ ನಿರೀಕ್ಷೆಯಲ್ಲಿರುವಾಗಲೇ
ಸುಟ್ಟು ಹೋದೆಯಲ್ಲೇ ಸುಧಾ-
ಮಹಿಳಾ ವರ್ಷದ, ಕನ್ನಡ ಜಾಗೃತಿ ವರ್ಷದ
ವೇಳಾಪಟ್ಟಿಯೊಳಗೆ ಸೇರುವ
ಸಾಧಿಸಿ ತೋರಿಸುವ ಛಲದ
ನಿನ್ನ ಕನಸುಗಳೆಲ್ಲಾ
ಮಣ್ಣಾಗಿ ಹೋದವಲ್ಲ ಸುಧಾ
ಬಿಡುಕ್ರೋಧ
ಅದೆಷ್ಟು ನಿರಾಸೆಯ ಮಾತುಗಳು
ತಿರು ತಿರುಗಿ ರೈಲು ಕಂಬಿ
ತುಂಬಿದ ಬಾವಿ. ನೇಣು
ಅದ್ಯಾಕೆ ಕಣ್ಣೀರು, ದ್ವೇಷ ಸೇಡು ಸಿಟ್ಟು
ಭಾವನೆಗಳು ಕೆರಳಿಸಿಕೊಳ್ಳುವಿಕೆ
– ಬಿಡು ಮಾತು
ಬೆಟ್ಟದಾಚೆಯ ಸೂರ್ಯ
ಕೈಗೆಟುಕದ ಕ್ರಾಂತಿಯೆಂದು
ಎಲ್ಲದಕ್ಕಿಂತಲೂ ಎಲ್ಲರಕ್ಕಿಂತಲೂ
ಚಂದ್ರ ಚಿಕ್ಕೆಗಳೇ ಸಮೀಪವೆಂದು
– ತೆಗದುಕೋ ಚಾಲೆಂಜ್
ಜಸ್ಟ್ ಶೂಟ್ ಶೂಟ್ ಶೂಟ್
ಒನ್ ಬಾಯ್ ಒನ್ ಯುವರ್
ಕಾಂಟ್ರೋವರ್ಸಿಯಲ್ ಥಾಟ್ಸ್
ಅಂಡ್ ಬಿಲ್ಡ್ ಅಪ್ ಯುವರ್ ಓನ್
ಸ್ಟ್ರಾಂಗ್ ಐಡಿಯಾಸ್
ಅಂಡ್ ಪರ್ಸನಾಲಿಟಿ
ಕಮಾನ್ ಸುಧಾ, ಚಿಯರ್ ಅಪ್.
*****
Related Post
ಸಣ್ಣ ಕತೆ
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…